ಬಾಳಿಕೆ

ಪ್ರಿಯ ಸಖಿ,
ಸಾವು ನಿಶ್ಚಿತವೆಂದು ತಿಳಿದೂ ಮಾನವ ತನ್ನ ಬದುಕಿನ ಕೊನೆಯ ಕ್ಷಣದವರೆಗೂ ತಾನು ಶಾಶ್ವತ. ತನ್ನಿಂದಲೇ ಪ್ರಪಂಚವೆಲ್ಲಾ ಎಂದುಕೊಂಡು ಇರುತ್ತಾನೆ. ಆದರೆ ಅವನು ಸತ್ತು ಹೆಣವಾದ ನಂತರ ಏತಕ್ಕೆ ಉಪಯೋಗಕ್ಕೆ ಬರುತ್ತಾನೆ? ಕವಿ ಜರಗನಹಳ್ಳಿ ಶಿವಶಂಕರ್ ಅವರು ತಮ್ಮ ಬಾಳಿಕೆ ಎಂಬ ಹನಿಗವನದಲ್ಲಿ.
ಹತ್ತಾರು ವರುಷ
ನೆರಳಾಗಿ ನಿಂತ ಮರ
ತೊಲೆಯಾಗಿ ಉಳಿಯಿತು
ನೂರಾರು ವರುಷ.
ನೂರು ವರುಷ
ಆಳಿದ ಅರಸ
ಉಳಿಯಲಿಲ್ಲ ಹೆಣವಾಗಿ
ಮೂರು ದಿವಸ
ಎನ್ನುತ್ತಾರೆ. ಎಷ್ಟು ನಿಜವಾದ ಮಾತಲ್ಲವೇ ಸಖಿ? ಮರ ಇದ್ದರೂ ಉಪಯೋಗಕ್ಕೆ ಬರುತ್ತದೆ. ಸತ್ತರೂ ಉಪಯೋಗಕ್ಕೆ ಬರುತ್ತದೆ. ಮಾನವ ಸತ್ತ ನಂತರವಂತೂ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ಆದರೆ ಬದುಕಿದ್ದಾಗಲಾದರೂ ಇತರರಿಗೆ, ಸಮಾಜಕ್ಕೆ ಉಪಯೋಗವಾಗುವಂತೆ ಬದುಕಿದರೆ ಅದಕ್ಕಿಂತಾ ಧನ್ಯತೆ ಬೇರೆಲ್ಲಿದೆ.

ಈ ಮನುಜ ಜನ್ಮದಲ್ಲಿ ಹುಟ್ಟಿ ಬಂದ ಮೇಲೆ ಅದನ್ನು ಸಾರ್ಥಕಗೊಳಿಸುವಂತೆ ಬದುಕುವುದು ಮನುಜನ ಕರ್ತವ್ಯ. ವ್ಯಕ್ತಿಗಳು ಅಳಿದರೂ ಅವರು ಮಾಡಿದ ಕೆಲಸ ಇತಿಹಾಸದ ಪುಟಗಳಲ್ಲಿ ದಾಖಲಾಗುವುದಂತೂ ಖಂಡಿತಾ. ಹಾಗಾದರೆ ಈ ಸಾವಿನ ಕಬಂಧ ಬಾಹುಗಳಲ್ಲಿ ಸಿಲುಕದೆ ಅವಿನಾಶಿಯಾಗಿ ಉಳಿಯುವುದು ಯಾವುದು? ಕಥೆಗಾರ, ಚಿಂತಕ, ಚದುರಂಗರು ‘ಮಾನವನ ಬದುಕಿನಲ್ಲಿ ಮರಣವೇ ಅತ್ಯಂತ ಪ್ರಮುಖವಾದ ಸತ್ಯವಾದ ಸಂಗತಿ, ಉಳಿದೆಲ್ಲಾ ವಿಷಯಗಳೂ ಗೌಣ. ಈ ಸಾವಿನ ಮರುಳುಗಾಡಿನಲ್ಲಿ ಅವಿನಾಶಿಯಾಗಿ ಉಳಿಯಬಲ್ಲ ಒಂದೇ ಒಂದು ವಸ್ತುವೆಂದರೆ-ಕಲೆ’ ಎನ್ನುತ್ತಾರೆ.

ಹೌದಲ್ಲವೇ ಸಖಿ ಯಾವ ಕಲೆಗೂ ಸಾವೆಂಬುದಿಲ್ಲ. ಅವಿನಾಶಿ ಕಲೆಯ ಹೆಸರಿನೊಂದಿಗೆ, ಕಲೆಗಾರ ಸತ್ತರೂ ಜೀವಂತವಾಗುಳಿಯುತ್ತಾನೆ! ನಿಜವಾದ ಬದುಕಿನ
ಸಾರ್ಥಕತೆ ಇರುವುದೇ ಇಲ್ಲಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಲೀ ಮರೀ ಇಲೀ ಮರೀ
Next post ಮಲ್ಲಿಗೆಯ ಮೊಗ್ಗುಗಳ ರಾಸಿ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys